Monday, October 25, 2010

ನಾನೇನು ನೀನೇನು ಅವನೇನು



ಚಿತ್ರ: ಗಾಳಿಮಾತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

ಕಪ್ಪನೆಯ ಮೋಡಗಳು ಕರಗುತ ನೀರಾಗಿ
ಮಳೆಯನು ನೆಲದಲಿ ಹರಿಸುತಿದೆ
ನೆಲವೆಲ್ಲ ನಗುನಗುತ ಹಚ್ಚನೆ ಹಸಿರಾಗಿ
ಬೆಳೆಯನು ಜನರಿಗೆ ಕೊಡುತಲಿರೆ
ಸಂತೋಷದಿ ನೀ ಬಾಳದೇ
ಹೇ ಸಂತೋಷದಿ ನೀ ಬಾಳದೇ
ಏಕೆ ಹೊಡೆದಾಡಿ ಕಾದಾಡುವೇ

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

ಗಾಳಿಯನು ನೀರನ್ನು ತಂದವ ನೀನಲ್ಲ
ಈ ನಿಜ ಏತಕೆ ಅರಿತಿಲ್ಲ
ಹಣ್ಣಿನಲಿ ಸಿಹಿಯನ್ನು ತಂದವ ನೀನಲ್ಲ
ಅರಿಯುವ ಜಾಣ್ಮೆಯೂ ಏಕಿಲ್ಲ
ನಿನದಲ್ಲದ ಸಂಪತ್ತಿಗೆ
ಹೇ ನಿನದಲ್ಲದ ಈ ಸಂಪತ್ತಿಗೆ ಏಕೆ ಬಡಿದಾಡಿ ಹೋರಾಡುವೆ

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

No comments: